ಮಂಗಳವಾರ, ಜೂನ್ 7, 2011

ಯೋಗಾಸನಕ್ಕೆ ರಾಜಕೀಯಾಸನ ಗೊತ್ತಿಲ್ಲ....!!!

ಎಂತಹ ವಿಪರ್ಯಾಸವಲ್ಲವೇ?
ಮರುಗಟ್ಟಿದ ಮನಸ್ಸಿಗೆ ದಿವ್ಯಚೇತನ ನೀಡುವ ಯೋಗಾಸನ ರಾಜಕೀಯಾಸನದ ಮುಂದೆ ಕೈಕಾಲು ನುಣುಚಿಕೊಂಡು ಬಿಡಿಸಿಕೊಳ್ಳಲಾಗದೆ ಹೇಗೆ ಒದ್ದಾಡುತ್ತಿದೆ ನೋಡಿ. ತಾನು ಕಲಿತ ಯೋಗವಿದ್ಯೆಯನ್ನು ಇತರರಿಗೆ ಹಂಚುತ್ತಾ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಬಾಬಾ ರಾಮದೇವ್ ಅದೇ ಉಮ್ಮಸ್ಸಿನಲ್ಲಿ ಭ್ರಷ್ಟಾಚಾರದ ವಿರುದ್ಧವೇನೋ ಉಪವಾಸ ಕುಳಿತದ್ದೂ ಆಯಿತು. ಅದು ಯಾರ ವಿರುದ್ಧ?!! ಕಾಂಗ್ರೆಸ್ ಮುಂದಾಳತ್ವದ ಯು.ಪಿ.ಎ ವಿರುದ್ಧ. ಜನಸಾಗರದ ಬೆಂಬಲದ ಪೊರೆಯ ಮುಂದೆ ಅದರ ಹೊರಗಿನ ಸತ್ಯ ಮಸುಕಾಗಿ ಗಿತ್ತೋ ಏನೋ? ಬಾಬಾರವರು ರಾಜಕೀಯ ಚದುರಂಗದಾಟದ ನಡೆಗಳನ್ನು ಊಹಿಸುವುದರಲ್ಲಿ ಎಡವಿರುವುದಕ್ಕೆ ಇತ್ತೀಚಿನ ವಿದ್ಯಮಾನಗಳೇ ಸಾಕ್ಷಿ!!
    ಮೊದಲೇ ಸಿ.ಡಬ್ಲ್ಯು.ಜಿ., ೨ಜಿ., ೩ಜಿ ಇತ್ಯಾದಿ ಹಗರಣಗಳನಡುವೆ ಗಿಜಿಗುಡುತ್ತಾ ಗಬ್ಬೆದ್ದು ಹೋಗಿದ್ದ ಕೇಂದ್ರ ಸರ್ಕಾರದ ಹೆಕ್ಕತ್ತಿನ ಮೇಲೆ ಸತ್ಯಾಗ್ರಹದ ಸುತ್ತಿಗೆಯಿಂದ ಇಕ್ಕಿದ್ದು ಅಣ್ಣ ಹಜಾರೆಯವರು!! ಆರಂಭದಲ್ಲಿ ಇದೂ ಒಂದು ಮಾಮೂಲಿ ಪ್ರತಿಭಟನೆ ಎಂದು ಮೀಸೆ ಮರೆಯಲ್ಲಿ ನಗುತ್ತಾ ಉಡಾಫೆ ತೋರಿದ ದಿಲ್ಲಿ ದಿವಾನರಿಗೆ ಸಾಮಾಜಿಕ ತಾಣಗಳು ಇಟ್ಟ ಬರೆಯಿಂದ ಎಚ್ಚರವಾಯ್ತು!! ಮಿತಿ ಮೀರುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಲೋಕಪಾಲ ಕಾಯ್ದೆಯ ಬೇಡಿಕೆಗೆ ಅಸ್ತು ಎಂದೇನೋ ಹೇಳಿತು. ಆದರೆ ಅದಕ್ಕೆ ಗೊತ್ತಿತ್ತು! ಜನಗಳು ಕೇಳುತ್ತಿರುವ ಕಾಯ್ದೆ ಜಾರಿಗೆ ತಂದರೆ ’ತಮ್ಮ ಅಂಡಿಗೆ ತಾವೇ ಬರೆಯಿಟ್ಟುಕೊಂಡಂತೆ’ಎನ್ನುವುದು!!
    ನಮ್ಮದೇಶವನ್ನು ಬಹುಕಾಲ ಆಳಿದ ಆಳುತ್ತಿರುವ ಕಾಂಗ್ರೆಸ್ ಬಹುತೇಕ ಬ್ರಿಟೀಷರ ನೀತಿಗಳನ್ನೇ ನೆಹರೂರವರ ಕಾಲದಿಂದಲೂ ಚಾಚೂ ತಪ್ಪದೆ ಅಳವಡಿಸಿಕೊಂಡು ನಮ್ಮನ್ನಾಳುತ್ತಿದೆ ಮತ್ತು ಹಾಳುಮಾಡುತ್ತಲೂ ಇದೆ. ಅಂದು ಪ್ರಧಾನ ಮಂತ್ರಿಯ ಕುರ್ಚಿಗಾಗಿ ದೇಶವನ್ನೇ ಒಡೆದದ್ದಾಯ್ತು! ನಂತರ ನೋಬೆಲ್ ಪ್ರಶಸ್ತಿಯ ದುರಾಸೆಗೊಳಗಾಗಿ ಕಾಶ್ಮೀರ ಬಲಿಕೊಟ್ಟಿದ್ದಾಯ್ತು!! ಅಕ್ಕಪಕ್ಕದ ನೆರೆಗಳನ್ನು ಅದ್ಧುಬಸ್ತಿನಲ್ಲಿಡುವಾಗ ಶ್ರೀಮಾನ್ ಲಾಲ ಬಹದ್ದೂರ್ ಶಾಸ್ತ್ರಿಯವರ ಪ್ರಾಣ ತೆಗಿದಿದ್ದೂ ಆಯ್ತು!!!. ತನ್ನ ಹೆಣ್ತನವನ್ನು ಬದಿಗೊತ್ತಿ ಅಧಿಕಾರಲಾಲಸೆಗಾಗೆ ಏನೆಲ್ಲಾ ಮಾಡಬಹುದು!! ಎಂದು ತನ್ನ ಮಕ್ಕಳಿಗೆ ಕಲಿಸಿದ್ದೂ ಆಯ್ತು!! ಹಗರಣಗಳನ್ನು ಹೆಗೆಲ್ಲಾ ಮುಚ್ಚಿಹಾಕಬಹುದು! ಅವುಗಳಿಗೆ ಕಾರಣರಾದವರನ್ನು ಹೇಗೆಲ್ಲಾ ಪಾರುಮಾಡಿ ಅವರವರ ದೇಶಕ್ಕೆ ಬೀಳ್ಕೊಡಬಹುದು!! ಎಂದು ಸಾಯುವ ಮುನ್ನವೇ ಹೇಳಿಕೊಟ್ಟಿದ್ದು ಇದೇ ಕಾಂಗ್ರೆಸ್ಸಿನ ಮಹಾನ್ ಪ್ರಭೃತಿಗಳು!!!!! ಜಾತಿಯ ಹೆಸರೇಳಿ ಹೇಗೆ ಒಂದು ಜ್ಯಾತ್ಯಾತೀತ ರಾಷ್ಟ್ರದಲ್ಲಿ ಪ್ರತಿ ಮನೆ ಮನಗಳನ್ನು ಮೀಸಲಾತಿಯ ಮೂಲಕ ಒಡೆದು ಹಾಳುಮಾಡಬಹುದೆಂದು ಅಂಧಕಾಲತ್ತಿಲ್ ನಿಂದಲೂ ಎಲ್ಲರಿಗೂ ತೋರಿಸಿಕೊಟ್ಟಿದ್ದು ಇದೇ ಕಾಂಗ್ರೆಸ್ ಪಕ್ಷ!!!!! ಇಂತಹ ಹಿನ್ನೆಲೆಯುಳ್ಳ ಪಕ್ಷದ ವಿರುದ್ಧ ಪ್ರತಿಭಟಿಸಿದರೆ ಯಾರಾದರೂ ಉಳಿಯುವುದುಂಟೇ?? ಇಲ್ಲ ಎನ್ನುವುದು ಬಾಬಾ ರಾಮದೇವ ಪ್ರಕರಣದಿಂದ ಸಾಭೀತಾಗಿದೆ!!
    ತನ್ನುಳಿವಿಗಾಗಿ ಯಾವ ವಾಮಮಾರ್ಗಕ್ಕಾದರೂ ಸಿದ್ಧವಾಗಿರುವ, ಯಾರ ಚಾರಿತ್ರ್ಯವಧೆಗಾದರೂ ಸರಿ, ಎಂತಹ ಅಸಹ್ಯಕರ ರೀತಿಯಲ್ಲಾದರೂ ಸರಿ ಹತ್ತಿಕ್ಕಿ ತೀರಲು ಭಾರತೀಯರನ್ನು ಹೇಗೆಲ್ಲಾ ಸುಲಭವಾಗಿ ದಾರಿ ತಪ್ಪಿಸಿ ಮೂರ್ಖರನ್ನಾಗಿಸಬಹುದೆಂದು ಇಡೀ ಜಗತ್ತಿಗೆ ಮತ್ತೊಮ್ಮೆ ತೋರಿಸಿಕೊಟ್ಟಿದ್ದು ಇದೇ ಕಾಂಗ್ರೆಸ್!! ಇದ್ಯಾವುದನ್ನೂ ಅವಲೋಕಿಸದೆ, ಅವಲೋಕಿಸಿದ್ದರೂ ನಿರ್ಲಕ್ಷಿಸಿದ್ದು ಬಾಬಾರವರು ಮಾಡಿದ ಮೊದಲ ತಪ್ಪು. ಅದಕ್ಕೆ ಹೇಳೋದು ’ಯೋಗಾಸನಕ್ಕೆ ರಾಜಕೀಯಾಸನ ಗೊತ್ತಿಲ್ಲ....!!!’ ಅಂತ
    ಅಣ್ಣಾರವರ ಉಪವಾಸದಿಂದ ಎಚ್ಚೆತ್ತುಕೊಂಡ ಸರ್ಕಾರ ಅವರಿಗೆ ಮಾತುನೀಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿತ್ತು!! ನಂತರ ಶುರುವಾಯ್ತು ನೋಡಿ ಕಪಿ(ಲ್)ಚೇಷ್ಠೆ!!! ಸಿ(ಮ)೦ಗನಾಟ!!!ಕಾಯ್ದೆಯಿಂದ ಏನೇನೂ ಪ್ರಯೋಜನವಿಲ್ಲ! ಭ್ರಷ್ಟಾಚಾರ ನಿಯಂತ್ರಣ ಸಾಧ್ಯವೇ ಇಲ್ಲ!! ಎಂದು ಹೇಳುವ ಮೂಲಕ ಇದುವರೆಗೆ ಜಾರಿಗೆ ಬಂದ ಹಲ್ಲಿಲ್ಲದ ಹತ್ತು ಕಾಯ್ದೆಯೊಳಗೆ ಹನ್ನೊಂದನೆಯದನ್ನು ತಂದು ’ಕೈ’ತೊಳೆದುಕೊಳ್ಳುವ ತನ್ನುದ್ದೇಶವನ್ನು ಜಗಜ್ಜಾಹೀರುಗೊಳಿಸಿತು!! ಹಾಗೆ ಮಾಡುವ ಸಲುವಾಗಿಯೇ ಲೋಕಪಾಲ ಸಮಿತಿಯಲ್ಲಿ ಒಡಕು ಮೂಡಿಸಲು ಪ್ರಯತ್ನಿಸಿದ್ದು! ಸಮಿತಿಯಸದಸ್ಯರೇ ಭ್ರಷ್ಟರು!! ಎನ್ನುವ ಹಣೆಪಟ್ಟಿ ಅಂಟಿಸಿದ್ದು!! ಇದುವರೆಗೆ ನಡೆದ ಲೋಕಪಾಲ ಸಭೆಗಳ ನಿರ್ಣಯಗಳನ್ನು ಜನತೆಗೆ ತಿಳಿಸದೆ ಮುಚ್ಚಿಟ್ಟಿರುವುದು! ಆದರೆ ಬಾಬಾರವರ ಘಟನೆಯಿಂದ ಎಚ್ಚೆತ್ತ ಹಜಾರೆಯವರು ಪಟ್ಟು ಬಿಗಿಹಿಡಿದಿರುವುದು ಸಾಮಾನ್ಯರಲ್ಲಿ ಸ್ವಲ್ಪ ಆಶಾಭಾವನೆಯನ್ನು ಚಿಗುರಿಸಿರುವುದು ಸುಳ್ಳಲ್ಲ. ’ಜೂನ್ ೩೦ ರೊಳಗೆ ಕರಡು ಸಿದ್ಧವಾಗಲೇಬೇಕು, ಕರಡು ಸಮಿತಿಯ ಸಭೆಗಳನ್ನು ದೂರದರ್ಶನದ ಮೂಲಕ ನೇರಪ್ರಸಾರ ಮಾಡಬೇಕು’ಎಂದು ಗುಡುಗುವ ಮೂಲಕ ತಾವು ರಾಮದೇವ್ ಬಾಬಾ ರಂತೆ ಮುಗ್ಗರಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದಾರಲ್ಲದೆ ನಾಳೆ ನಡೆಯಬೇಕಿದ್ದ ಕರಡು ಸಮಿತಿಯ ಸಭೆಯನ್ನು ಬಹಿಷ್ಕರಿಸುವ ಮೂಲಕ ಸರ್ಕಾರಕ್ಕೆ ಮುಜುಗರವುಂಟು ಮಾಡಿದ್ದಾರೆ.
    ಆದರೆ ಈ ನಾಚಿಗೆಗೆಟ್ಟ ಸರ್ಕಾರ "ಮುಂದೊಮ್ಮೆ ಕಪ್ಪು ಹಣ ವಾಪಸ್ಸು ತನ್ನಿ ಎನ್ನುವವರು ದೇಶದ್ರೋಹಿಗಳು" ಎಂಬ ಕೆಟ್ಟ ಕಾನೂನನ್ನು ತರಲು ಹೇಸುವುದಿಲ್ಲವೇನೋ!!! ಎನ್ನಿಸುತ್ತಿದೆ.  ಎಲ್ಲಾ ಕಾಂಗ್ರೆಸ್ ಮಹಾತ್ಮೆ!!! ಅದಕ್ಕೆ ಸಾಕ್ಷಿ ಎಂಬಂತೆ ಕಾಂಗ್ರೆಸ್ ಮುಖಂಡ ದ್ವಿವೇದಿ ಯವರ ಪತ್ರಿಕಾಗೋಷ್ಠಿಯಲ್ಲಿ ನಡೆದ ಚಪ್ಪಲಿ ’ಶೋ’ ಕೂಡಾ ಕಾಂಗ್ರೆಸ್ಸ್ ನಿರ್ದೇಶಿತ ನಾಟಕವೇ!! ಎನ್ನುವುದು ಆ ದೃಶ್ಯಾವಳಿ ನೋಡಿದ ಯಾವ ಮುಠ್ಠಾಳನಿಗೂ ತಿಳಿದುಬಿಡಿತ್ತದೆ. ದ್ವಿವೇದಿ ಬಳಿ ಆತ ಶೂ ಹಿಡಿದು ನಿಂತಾಗ ಆತನ ಅಕ್ಕಪಕ್ಕದಲ್ಲಿ ಯಾರೂ ಇರಲಿಲ್ಲ!!! ಬೇರೆಯವರು ಬಂದು ಹಿಡಿದು ತಳ್ಳುವವರೆಗೂ ಆತ ಶೂ ತೋರಿಸಿತ್ತಾ ಸುಮ್ಮನೆ ನಿಂತಿದ್ದನೇ ಹೊರತು ಹೊಡೆಯುವ ಯತ್ನವನ್ನೂ ಮಾಡಲಿಲ್ಲ!!! ಅವರು ಹೇಳುವಂತೆ ಆತ ನಿಜವಾಗಿಯೂ ಆರ್.ಎಸ್.ಎಸ್.ನ ಕಾರ್ಯಕರ್ತನಾಗಿದ್ದಲ್ಲಿ ಆತನಿಗೆ ಅವರನ್ನು ಒಡೆಯುವ ಉದ್ದೇಶವಾಗಲಿ ಇದ್ದಲ್ಲಿ ಒಡೆದು ತಪ್ಪಿಸಿಕೊಳ್ಳಲು ಪ್ರಯ್ತಿಸುತ್ತಿದ್ದನೇ ಹೊರತು ಸುಖಾಸುಮ್ಮನೆ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಇದೆಲ್ಲವನ್ನು ನೋಡಿದರೆ ಭ್ರಷ್ಟರನ್ನು ಆದಷ್ಟು ರಕ್ಷಿಸಲು ಹೇಗೆಲ್ಲಾ ಸಾಧ್ಯವೋ ಹಾಗೆಲ್ಲಾವೂ ಸರ್ಕಾರ ಪ್ರಯತ್ನಿಸುತ್ತಿರುವುದು ಸ್ಪಷ್ಟ.
    ಇಂತಹ ಸ್ಥಿಯಲ್ಲಿ ಬಾಬಾ ರಾಮದೇವ ರವರು ಇನ್ನಾದರೂ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗಿದೆ. ಏಕೆಂದರೆ ಅವರು ಕೈ ಹಾಕಿರುವ ಚಳುವಳಿ ಒಳ್ಳೆಯ ಉದ್ದೇಶದ್ದು. ಬಾಬರವನ್ನು ಕೆಣಕಿ ಅವರಿಂದ ಪ್ರತಿಕ್ರಿಯೆಗಳನ್ನು ಹೊರತೆಗೆದು ಆಟ ಆಡಿಸುತ್ತಾ ಸಮಯ ವ್ಯರ್ಥಮಾಡುತ್ತಾ ಕುಳಿತಿದೆ. ಆದ್ದರಿಂದ ಬಾಬಾ ರವರು ಉಪವಾಸ ಸತ್ಯಾಗ್ರಹದ ಜೊತೆಗೆ ಮೌನವ್ರತವನ್ನೂ ಆಚರಿಸಿದರೆ ಸರ್ಕಾರಕ್ಕೆ ಬಿಸಿಮುಟ್ಟೀತು!! ಏಕೆಂದರೆ ರಾಮದೇವ್ ಬಾಬಾರಿಗೆ ಯೋಗ ಸಿದ್ದಿಸಿದಷ್ಟು ರಾಜಕೀಯದ ಪರಿಚಯವಿಲ್ಲ!! ಅದಕ್ಕೆ ಕಪಿ(ಲ್) ಸಿಂಗ್(ಲೀಕ)ಗಳು ಮೆಲೆರೆಗಿ ಗಾಯಗೊಳಿಸುತ್ತಿರುವುದು. ಇದು ಹೀಗೆ ಮುಂದುವರಿದಲ್ಲಿ ಚಳುವಳಿ ದಾರಿತಪ್ಪುವ ಸಾಧ್ಯತೆಯೇ ಹೆಚ್ಚಲ್ಲವೇ?

2 ಕಾಮೆಂಟ್‌ಗಳು:

ಗಿರೀಶ್.ಎಸ್ ಹೇಳಿದರು...

sir nija,namma deshavannu haalu maadidavaru congress navare..uttama lekhana....

ಅನಾಮಧೇಯ ಹೇಳಿದರು...

"ಉಮ್ಮಸ್ಸು" ಅಲ್ಲಾರೀ ಅದು "ಹುಮ್ಮಸ್ಸು".