ಮಂಗಳವಾರ, ಡಿಸೆಂಬರ್ 23, 2008
ಏನೋ ಒಂಥರಾ ..ಆ ....ಆ
ತುಂಬಾ ದಿನಗಳ ನಂತರ ಬರೆಯಲು ಕುಳಿತರೆ ನಿಜಕ್ಕೂ ಏನೋ ಒಂಥರಾ ಆಗೋದು ಯರ್ರಿಗಾದ್ರೂ ಸಹಜವೇ. ಇರಲಿ ಪಿಟೀಲು ಕುಯ್ಯುವುದು ಬಿಟ್ಟು ಈ ಏನೋಒಂಥರಾ ದ ಬಗ್ಗೆ ಮಾತನಾಡೋಣ. ಏನೋ ಒಂಥರಾ ಎನ್ನುವುದು ಎಲ್ಲರಿಗು ವಕ್ಕರಿಸುವ ರೋಗವೂ ಹೌದು, ಕೆಲ ವೇಳೆ ವರದಾನವೂ ಹೌದು. ಬೆಳ್ಳಂಬೆಳಗ್ಗೆ ಕೊರೆಯುವ ಚಳಿಯ ಸುಖನಿದ್ರೆಯ ಸಮಯದಲ್ಲಿ ಮಡದಿ ಸಮಯದ ಸುಪ್ರಭಾತ ಹಾಡುತ್ತಾ ಕಾಫಿಯ ಕಪ್ಪಿಡಿದು ಹೊದ್ದಿದ್ದ ಹೊದಿಕೆಯ ಸರಿಸಿದರೆ "ಇವಳ್ಯಾಕೆ ಯಾವಾಗಲು ಏನೋ ಒಂಥರಾ ?" ಅನಿಸದಿರದು. ಆಕೆ ಆ ರೀತಿ ಎಬ್ಬಿಸಿದ ದಿನ ಪೂರ್ತಿ "ಏನೋ ಒಂಥರಾ " ದ ಎಫ್ಫೆಕ್ಟು ಆಫೀಸಿನಲ್ಲಿ, ಸಹೋದ್ಯೋಗಿಗಳೊಡನೆ , ಕಾಫಿ ತರುವ ಜವಾನನೊಂದಿಗೆ, ಟೇಬಲ್ ಮೇಲಿನ ಫೈಲೇ ಗಳೊಡನೆ, ಬೇಗನೆ ಸ್ಟಾರ್ಟ್ ಆಗದ ಸ್ಕೂಟರ್ ನೊಡನೆ ಇತ್ಯಾದಿ ಇತ್ಯಾದಿಗಲೊಡನೆ ದಿನವೆಲ್ಲಾ "ಏನೋ ಒಂಥರಾ "
ಇನ್ನು ಉಪಯೋಗದ ಮಾತಿಗೆ ಬಂದರೆ ಯಾರದರೂ ಏನಾದ್ರು ಕೆಲಸ ಹೇಳಿದ್ರೆ ಇವತ್ತು ನನ್ಕೈಲಿ ಮಾಡಕ್ಕಾಗಲ್ಲ ಯಾಕಂದ್ರೆ "ಏನೋ ಒಂಥರಾ " ಎಂದು ಹೇಳಿ ತಪ್ಪಿಸಿಕೊಳ್ಳಬಹುದು.
ಹಾಗಾಗಿ ಇವತ್ತು ನನಗೆ ಬರಿಯುವುದಕ್ಕೆ "ಏನೋ ಒಂಥರಾ "
ಮಂಗಳವಾರ, ಡಿಸೆಂಬರ್ 2, 2008
ಅಶ್ರುತರ್ಪಣ
ಪ್ರಿಯ ಬ್ಲಾಗಿಗರೇ,
ಮೊನ್ನೆ ನಡೆದ ಮುಂಬೈ ನ ಬಾಂಬ್ ದಾಳಿಯಲ್ಲಿ ದುಷ್ಟರ ಸಂಚಿಗೆ ಬಲಿಯಾಗಿ, ತಮ್ಮ ಪ್ರಾಣ ಕಳೆದಿಕೊಂದವರಿಗೆ, ಆ ಖೂಳ ರನ್ನು ಸೆದೆಬಡಿದು ಜಯಿಸುವ ಹಾದಿಯಲ್ಲಿರುವಾಗ " ವೀರ ಮರಣವನ್ನಪ್ಪಿದ" ವೀರ ಸೇನಾನಿಗಳಿಗೆ ನನ್ನ ಸಂತಾಪವನ್ನು ಈ ಮುಲ್ಕ ಅರ್ಪಿಸುತಿದ್ದೇನೆ .
ಇದರ ಜೊತೆಗೆ ನಮ್ಮ ಹೇಸಿಗೆ ರಾಜಕಾರಣಿಗಳ ಕುತ್ಸಿತ ಬುದ್ದಿ ಕೂಡ ನಮ್ಮ ಪ್ರಾಣಗಳಿಗೆ ನಿಜವಾಗಿ ನಮಗೆ ರಕ್ಷಣೆ ಇದೆಯೇ ಎಂಬ ಜಿಜ್ಞಾಸೆಯನ್ನು ದೇಶದ ತುಂಬಾ ಹುಟ್ಟುಹಾಕಿದೆ. ನಮ್ಮದೇಶದ ಅಮೂಲ್ಯವಾದ ರಕ್ಷಣಾ ವ್ಯವಸ್ರೆಯನ್ನು ಈ ಗೊಮುಖವ್ಯಾಗ್ರರು ಹೀಗೆ ತಮ್ಮ ಸ್ವಾರ್ತಕ್ಕೆ ಬಳಸಿಕೊಂಡಿದ್ದಾರೆ, ಅದರಿಂದ ದೇಶದ ಘನತೆಗೆ ಹೀಗೆ ಚ್ಯುತಿಯಾಯಿತು? ಎನ್ನುವುದನ್ನು ನೆನಸಿಕೊಂಡರೆ ಯಾವ ಭಾರತಿಯನಿಗಾದರು ರಕ್ತ ಕುದಿಯುವುದು ಸಹಜವೇ.
ಇದಕ್ಕೆ ನಿಜವಾಗಿಯು ಪರಿಹಾರವಿಲ್ಲವೇ? ಇದಕ್ಕೆ ನಿಜಕ್ಕೂ ಹೊಣೆ ಯಾರು? ಎಂದು ಅವಲೋಕಿಸಿದರೆ ಖಂಡಿತವಾಗಿಯೂ ಸಿಗುವ ಉತ್ತರ " ಪ್ರತಿಯೊಬ್ಬ ಭಾರತೀಯನು ಇದಕ್ಕೆ ಹೊಣೆ ಎನ್ನುವುದು" ವಿಪರ್ಯಾಸವೇ ಸರಿ. ನಮ್ಮ ಪ್ರತಿನಿದಿಗಳನ್ನು ಚುನಾಯಿಸುವಾಗ ಸರಿಯಾಗಿ ಯೋಚಿಸಿ ಚುನಾಯಿಸಿದ್ದರೆ, ಸರ್ಕಾರಿ ಕಛೇರಿಯಲ್ಲಿ ನಮ್ಮ ಕೆಲಸ ಮಾಡಿಕೊಡಲು, ಲಂಚ ಕೇಳಿದವನ ಕೆನ್ನೆಗೆ ನಾಲ್ಕು ಬಾರಿಸುವ ಭಂಡ ಧೈರ್ಯ ನಮಗಿದ್ದಿದ್ದರೆ, ನಮಗೆ ಮತ್ತು ನಮ್ಮ ನೆರೆಯವರಿಗೆ ಯರಿದಲಾದ್ರು ಅನ್ಯಾಯವಾದಾಗ ಅನ್ಯಾಯ ಮಾಡಿದವರನ್ನು ಕೇಳುವ ಧೈರ್ಯ ಮಾಡಿದ್ದರೆ ನಮಗೆ ಖಂಡಿತ ಇಂದು ಈ ಸ್ಥಿತಿ ಬರುತ್ತಿರಲಿಲ್ಲ.
ಇಂಥ ಸಮಸ್ಯೆ ಬಂದಾಗ ಸ್ವಲ್ಪ ದಿನ ನಮ್ಮ ಮಾದ್ಯಮಗಳು ಎರಡು ದಿನ ಬಾಯಿ ಬದಿದುಕೊಲ್ಲುತ್ತವೆ. ಮೂರನೇ ದಿನ ಯಾವುದೋ ಸಿನಿಮಾ ತಾರೆಯಾ ಚಪ್ಪಲಿ ಕಳೆದದ್ದು, ನಮ್ಮ ಯಾವುದೊ ಮಂತ್ರಿಯ ಕೆಲಸಕ್ಕೆ ಬಾರದ ಸಮಾರಂಭಗಳು, ಅಸಹ್ಯ ಭರವಸೆಗಳು ಸುದ್ದಿಗಲಾಗಿರುತ್ತವೆ. ಇದು ನಮ್ಮ ದೇಶದ ದುರಂತವೋ ಅಥವಾ ನಾವೇ ಸೃಷ್ಟಿಸಿಕೊಂಡ ಅನೈತಿಕ ಕಂದರವೋ? ಗೊತ್ತಿಲ್ಲ.
ಮೊನ್ನೆ ನಡೆದ ಮುಂಬೈ ನ ಬಾಂಬ್ ದಾಳಿಯಲ್ಲಿ ದುಷ್ಟರ ಸಂಚಿಗೆ ಬಲಿಯಾಗಿ, ತಮ್ಮ ಪ್ರಾಣ ಕಳೆದಿಕೊಂದವರಿಗೆ, ಆ ಖೂಳ ರನ್ನು ಸೆದೆಬಡಿದು ಜಯಿಸುವ ಹಾದಿಯಲ್ಲಿರುವಾಗ " ವೀರ ಮರಣವನ್ನಪ್ಪಿದ" ವೀರ ಸೇನಾನಿಗಳಿಗೆ ನನ್ನ ಸಂತಾಪವನ್ನು ಈ ಮುಲ್ಕ ಅರ್ಪಿಸುತಿದ್ದೇನೆ .
ಇದರ ಜೊತೆಗೆ ನಮ್ಮ ಹೇಸಿಗೆ ರಾಜಕಾರಣಿಗಳ ಕುತ್ಸಿತ ಬುದ್ದಿ ಕೂಡ ನಮ್ಮ ಪ್ರಾಣಗಳಿಗೆ ನಿಜವಾಗಿ ನಮಗೆ ರಕ್ಷಣೆ ಇದೆಯೇ ಎಂಬ ಜಿಜ್ಞಾಸೆಯನ್ನು ದೇಶದ ತುಂಬಾ ಹುಟ್ಟುಹಾಕಿದೆ. ನಮ್ಮದೇಶದ ಅಮೂಲ್ಯವಾದ ರಕ್ಷಣಾ ವ್ಯವಸ್ರೆಯನ್ನು ಈ ಗೊಮುಖವ್ಯಾಗ್ರರು ಹೀಗೆ ತಮ್ಮ ಸ್ವಾರ್ತಕ್ಕೆ ಬಳಸಿಕೊಂಡಿದ್ದಾರೆ, ಅದರಿಂದ ದೇಶದ ಘನತೆಗೆ ಹೀಗೆ ಚ್ಯುತಿಯಾಯಿತು? ಎನ್ನುವುದನ್ನು ನೆನಸಿಕೊಂಡರೆ ಯಾವ ಭಾರತಿಯನಿಗಾದರು ರಕ್ತ ಕುದಿಯುವುದು ಸಹಜವೇ.
ಇದಕ್ಕೆ ನಿಜವಾಗಿಯು ಪರಿಹಾರವಿಲ್ಲವೇ? ಇದಕ್ಕೆ ನಿಜಕ್ಕೂ ಹೊಣೆ ಯಾರು? ಎಂದು ಅವಲೋಕಿಸಿದರೆ ಖಂಡಿತವಾಗಿಯೂ ಸಿಗುವ ಉತ್ತರ " ಪ್ರತಿಯೊಬ್ಬ ಭಾರತೀಯನು ಇದಕ್ಕೆ ಹೊಣೆ ಎನ್ನುವುದು" ವಿಪರ್ಯಾಸವೇ ಸರಿ. ನಮ್ಮ ಪ್ರತಿನಿದಿಗಳನ್ನು ಚುನಾಯಿಸುವಾಗ ಸರಿಯಾಗಿ ಯೋಚಿಸಿ ಚುನಾಯಿಸಿದ್ದರೆ, ಸರ್ಕಾರಿ ಕಛೇರಿಯಲ್ಲಿ ನಮ್ಮ ಕೆಲಸ ಮಾಡಿಕೊಡಲು, ಲಂಚ ಕೇಳಿದವನ ಕೆನ್ನೆಗೆ ನಾಲ್ಕು ಬಾರಿಸುವ ಭಂಡ ಧೈರ್ಯ ನಮಗಿದ್ದಿದ್ದರೆ, ನಮಗೆ ಮತ್ತು ನಮ್ಮ ನೆರೆಯವರಿಗೆ ಯರಿದಲಾದ್ರು ಅನ್ಯಾಯವಾದಾಗ ಅನ್ಯಾಯ ಮಾಡಿದವರನ್ನು ಕೇಳುವ ಧೈರ್ಯ ಮಾಡಿದ್ದರೆ ನಮಗೆ ಖಂಡಿತ ಇಂದು ಈ ಸ್ಥಿತಿ ಬರುತ್ತಿರಲಿಲ್ಲ.
ಇಂಥ ಸಮಸ್ಯೆ ಬಂದಾಗ ಸ್ವಲ್ಪ ದಿನ ನಮ್ಮ ಮಾದ್ಯಮಗಳು ಎರಡು ದಿನ ಬಾಯಿ ಬದಿದುಕೊಲ್ಲುತ್ತವೆ. ಮೂರನೇ ದಿನ ಯಾವುದೋ ಸಿನಿಮಾ ತಾರೆಯಾ ಚಪ್ಪಲಿ ಕಳೆದದ್ದು, ನಮ್ಮ ಯಾವುದೊ ಮಂತ್ರಿಯ ಕೆಲಸಕ್ಕೆ ಬಾರದ ಸಮಾರಂಭಗಳು, ಅಸಹ್ಯ ಭರವಸೆಗಳು ಸುದ್ದಿಗಲಾಗಿರುತ್ತವೆ. ಇದು ನಮ್ಮ ದೇಶದ ದುರಂತವೋ ಅಥವಾ ನಾವೇ ಸೃಷ್ಟಿಸಿಕೊಂಡ ಅನೈತಿಕ ಕಂದರವೋ? ಗೊತ್ತಿಲ್ಲ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)