ಮಂಗಳವಾರ, ಡಿಸೆಂಬರ್ 2, 2008

ಅಶ್ರುತರ್ಪಣ

ಪ್ರಿಯ ಬ್ಲಾಗಿಗರೇ,
ಮೊನ್ನೆ ನಡೆದ ಮುಂಬೈ ನ ಬಾಂಬ್ ದಾಳಿಯಲ್ಲಿ ದುಷ್ಟರ ಸಂಚಿಗೆ ಬಲಿಯಾಗಿ, ತಮ್ಮ ಪ್ರಾಣ ಕಳೆದಿಕೊಂದವರಿಗೆ, ಆ ಖೂಳ ರನ್ನು ಸೆದೆಬಡಿದು ಜಯಿಸುವ ಹಾದಿಯಲ್ಲಿರುವಾಗ " ವೀರ ಮರಣವನ್ನಪ್ಪಿದ" ವೀರ ಸೇನಾನಿಗಳಿಗೆ ನನ್ನ ಸಂತಾಪವನ್ನು ಈ ಮುಲ್ಕ ಅರ್ಪಿಸುತಿದ್ದೇನೆ .
ಇದರ ಜೊತೆಗೆ ನಮ್ಮ ಹೇಸಿಗೆ ರಾಜಕಾರಣಿಗಳ ಕುತ್ಸಿತ ಬುದ್ದಿ ಕೂಡ ನಮ್ಮ ಪ್ರಾಣಗಳಿಗೆ ನಿಜವಾಗಿ ನಮಗೆ ರಕ್ಷಣೆ ಇದೆಯೇ ಎಂಬ ಜಿಜ್ಞಾಸೆಯನ್ನು ದೇಶದ ತುಂಬಾ ಹುಟ್ಟುಹಾಕಿದೆ. ನಮ್ಮದೇಶದ ಅಮೂಲ್ಯವಾದ ರಕ್ಷಣಾ ವ್ಯವಸ್ರೆಯನ್ನು ಈ ಗೊಮುಖವ್ಯಾಗ್ರರು ಹೀಗೆ ತಮ್ಮ ಸ್ವಾರ್ತಕ್ಕೆ ಬಳಸಿಕೊಂಡಿದ್ದಾರೆ, ಅದರಿಂದ ದೇಶದ ಘನತೆಗೆ ಹೀಗೆ ಚ್ಯುತಿಯಾಯಿತು? ಎನ್ನುವುದನ್ನು ನೆನಸಿಕೊಂಡರೆ ಯಾವ ಭಾರತಿಯನಿಗಾದರು ರಕ್ತ ಕುದಿಯುವುದು ಸಹಜವೇ.
ಇದಕ್ಕೆ ನಿಜವಾಗಿಯು ಪರಿಹಾರವಿಲ್ಲವೇ? ಇದಕ್ಕೆ ನಿಜಕ್ಕೂ ಹೊಣೆ ಯಾರು? ಎಂದು ಅವಲೋಕಿಸಿದರೆ ಖಂಡಿತವಾಗಿಯೂ ಸಿಗುವ ಉತ್ತರ " ಪ್ರತಿಯೊಬ್ಬ ಭಾರತೀಯನು ಇದಕ್ಕೆ ಹೊಣೆ ಎನ್ನುವುದು" ವಿಪರ್ಯಾಸವೇ ಸರಿ. ನಮ್ಮ ಪ್ರತಿನಿದಿಗಳನ್ನು ಚುನಾಯಿಸುವಾಗ ಸರಿಯಾಗಿ ಯೋಚಿಸಿ ಚುನಾಯಿಸಿದ್ದರೆ, ಸರ್ಕಾರಿ ಕಛೇರಿಯಲ್ಲಿ ನಮ್ಮ ಕೆಲಸ ಮಾಡಿಕೊಡಲು, ಲಂಚ ಕೇಳಿದವನ ಕೆನ್ನೆಗೆ ನಾಲ್ಕು ಬಾರಿಸುವ ಭಂಡ ಧೈರ್ಯ ನಮಗಿದ್ದಿದ್ದರೆ, ನಮಗೆ ಮತ್ತು ನಮ್ಮ ನೆರೆಯವರಿಗೆ ಯರಿದಲಾದ್ರು ಅನ್ಯಾಯವಾದಾಗ ಅನ್ಯಾಯ ಮಾಡಿದವರನ್ನು ಕೇಳುವ ಧೈರ್ಯ ಮಾಡಿದ್ದರೆ ನಮಗೆ ಖಂಡಿತ ಇಂದು ಈ ಸ್ಥಿತಿ ಬರುತ್ತಿರಲಿಲ್ಲ.
ಇಂಥ ಸಮಸ್ಯೆ ಬಂದಾಗ ಸ್ವಲ್ಪ ದಿನ ನಮ್ಮ ಮಾದ್ಯಮಗಳು ಎರಡು ದಿನ ಬಾಯಿ ಬದಿದುಕೊಲ್ಲುತ್ತವೆ. ಮೂರನೇ ದಿನ ಯಾವುದೋ ಸಿನಿಮಾ ತಾರೆಯಾ ಚಪ್ಪಲಿ ಕಳೆದದ್ದು, ನಮ್ಮ ಯಾವುದೊ ಮಂತ್ರಿಯ ಕೆಲಸಕ್ಕೆ ಬಾರದ ಸಮಾರಂಭಗಳು, ಅಸಹ್ಯ ಭರವಸೆಗಳು ಸುದ್ದಿಗಲಾಗಿರುತ್ತವೆ. ಇದು ನಮ್ಮ ದೇಶದ ದುರಂತವೋ ಅಥವಾ ನಾವೇ ಸೃಷ್ಟಿಸಿಕೊಂಡ ಅನೈತಿಕ ಕಂದರವೋ? ಗೊತ್ತಿಲ್ಲ.

ಕಾಮೆಂಟ್‌ಗಳಿಲ್ಲ: