ಬುಧವಾರ, ಅಕ್ಟೋಬರ್ 20, 2010

ನಮ್ಮ ಸಣ್ಣ ತಾಯಮ್ಮನ ಕಥೆ

ನಮ್ಮ ಕಥಾನಾಯಕಿ ಸಣ್ಣ ತಾಯಮ್ಮ ತುಂಬಾ ಅಂದ್ರೆ ತುಂಬ ಮುಗ್ದೆ, ಎಷ್ಟು ಮುಗ್ದೆ ಅಂದ್ರೆ, ಒಂದ್ಸಲ ಅವಳ ಮಗ ಲೋಕೇಶ್ ಸಂಜೆ ೬ ಗಂಟೆಯಲ್ಲಿ ಬೀದಿಯಲ್ಲಿ ತನ್ನ ಗೆಳೆಯರ ಜೊತೆ ಆಟವಾಡುತ್ತಿದ್ದ.ಅಡುಗೆಮನೆಯೊಳಗೆ ಮಗಳುಬೃಂದಾ ಅಕ್ಕಿ ರೊಟ್ಟಿ ಮಾದುತ್ತಿದ್ದಳು ನಮ್ಮ ಕ ವಿ ಮ ಅವರ ಪ್ರಭಾವದಿಂದಾಗಿ ಬಿದರಕೋಟೆ ಪೂರ್ತಿಯಾಗಿ ಕತ್ತಲೆಯಲ್ಲಿ ಮುಳುಗಿತ್ತು. ಚಿನ್ನರೊಡನೆ ಆಡುತ್ತಿದ್ದ ಲೋಕೇಶ ಒಂದು ಕಪ್ಪೆ ಯನ್ನು ಬಡಿದು ಕೊಂದ. ಕೊಂದ ವನು ಸೀದಾ ಅಡುಗೆಮನೆಯಲ್ಲಿದ್ದ ಅರ್ದಂಬರ್ದ ರುಬ್ಬಿದ್ದ ಚಾಟ್ನಿ ಬಳಿ ಇಟ್ಟು ಹೊರಬಂದದ್ದನ್ನ ಅವನ ಅಕ್ಕ ಬೃಂದಾ ಕೂಡ ಗಮನಿಸಲಿಲ್ಲ. ಅಷ್ಟರಲ್ಲಿ ಸಣ್ಣ ತಾಯಮ್ಮನಿಗಿ ಒಳಗಿಂದ ಬರುತ್ತಿದ್ದ ರೊಟ್ಟಿಯ ವಾಸನೆಯಿಂದಾಗಿ ಅವಳ ಹಸಿವು ಸಿಕ್ಕಾಪಟ್ಟೆ ಜಾಸ್ತಿಯಾಯಿತು. ಹೊರಗೆ ತನ್ನ ಅಕ್ಕ ಪಕ್ಕದ ಮನೆಯವರೊಡನೆ ಕುಳಿತು ಕಂಡವರ ಮನೆಯ ಸುದ್ದಿ ಕೇಳುತ್ತಾ ಕಡ್ಡಿಪುಡಿ ಬಾಯದಿಸುತ್ತಿದ್ದವಳು "ಮೇಯೋ ಬುರುಂದ ವಟ್ಟೆಯೊಳಗೆ ಅಗುಸ್ರ ಕತ್ತೆ ಓದೋಯ್ತವೆ ತಿನ್ನಾಕೆ ತಾರ್ಲಮ್ಮಿ" ಅಂದಳು.
"ಅಮ್ಮೋ ವೋಳಕ್ಕೊಗಿ ತಿನ್ನು, ಹಕ್ಕಿ ಹಾರೋ ವೊತ್ತು, ಇಕ್ಕೆ ಗಿಕ್ಕೆ ಉದರಾದು" ಅಂತಪಕ್ಕದ್ಮನೆ ಗೌರಕ್ಕ ಬಿತ್ತಿ ಸಲಹೆ ಕೊಟ್ಳು.
"ಇದೇನ್ ಗೌರಿ ಹಕ್ಕಿ ಮರುದ್ಮ್ಯಲೇ ಕುಂತಾಗ ಮಾತ್ರ ಅಲ್ವ ಪಿಕ್ಕೆ ಇಕ್ಕಾದು. ಹರಾದ್ವಾಗ ಎಲ್ಲರ ಇಕ್ಕವ" ಅಂತ ತನ್ನ ಬಾಯೊಳಗಿನ ಕಡ್ಡಿಪುಡಿ ಉಗಿಯುತ್ತ ಕೇಳಿದಳು.

ಇನ್ನು ಇವಳ ತರ್ಕಕ್ಕೆಉತ್ತರಿಸುತಿದ್ದರೆ ಬೆಳಕಅರಿವುದೆಂದು ಹೆಂಗಸರ ಸಮಾವೇಶದಿಂದ ಗೌರಕ್ಕ "ಮುಸ್ಸಂದೆಯಯ್ತು ದೀಪ ಅಸ್ಸುವ " ಅಂತ ಮೇಲೆದ್ದಳು.
ಅಷ್ಟರಲ್ಲಿ ಮಗಳು ರೊಟ್ಟಿ ಮತ್ತು ಚಟ್ನಿ ಹಾಕಿದ ಸಿಲ್ವಾರದ ಪ್ಲೇಟ್ ತಂದು ಕೊಟ್ಟಳು .
ತಾಯಮ್ಮ ಚೂರು ರೊಟ್ಟಿ ಮುರಿದು ಚಟ್ನಿ ಹಜ್ಜಿ ಬಾಯಿಗೆ ಇಟ್ಟಳು!
" ತ್ತು! ಇವಳ ಹಾಳಾಗ ಯಾವ ಸೀಮೆ ಚತ್ನಿಯಮ್ಮಿ ಇದು, ಒಂದುಪ್ಪಿಲ ಸಪ್ಪಇಲ್ಲ " ಎಂದು ಗೊಣಗುತ್ತ ಅರ್ದ ರೊಟ್ಟಿ ತಿಂದಳು. ಮುಂದೆ ಆ ಕೆಟ್ಟ ರುಚಿಯ ಚತ್ನಿಯೋದನೆ ರೊಟ್ಟಿ ತಿನ್ನಲು ಸಾದ್ಯವಾಗಲಿಲ್ಲ. "ನಗನ್ನನಂಗಡಿ ಉಪ್ಪು ಕಾಲಿಯಾಗಿತ್ತೋ, ಮದೆವನಂಗ್ದೀಲಿ ಮೆಣಸು ಕಾಯ್ ಇರ್ಲಿಲ್ವೋ, ಕೂಲಿಯೋ ನಾಲಿಯೋ ಮಾಡ ತಂದ್ ಹಾಕುದ್ರುವೆ ನೆಟ್ಗೆ ಅಡ್ಗೆ ಮಾಡಕ್ ಬರಲ್ಲ, ಮುಂದೆ ಗಂಡನ್ನ ಜೊತೆ ಯಂಗ್ ಬಾಳಿ ನಾ ಕಾಣೆ" . ಇತ್ಯಾದಿ ಇತ್ಯಾದಿ ಬಯ್ಯುತ್ತ ೨ ರೊಟ್ಟಿ ತಿಂದಳು. ಅಷ್ಟರಲ್ಲಿ ಹೊರಗೆ ಆಡುತ್ತಿದ್ದ ಮಗ ಒಳ ಬಂದು " ಅಕ್ಕೋ ಇಲ್ಲಿ ಕಪ್ಪೆ ಮದ್ಗಿಡ್ನಲ್ಲ ಎಲ್ಲ" ಅಂದ. ಬ್ರುನ್ದಗೆ ಜಂಗಾಬಲವೇ ಉಡುಗಿ ಹೋಯ್ತು. ಅದೇ ಅನುಮಾನದ ಮೇಲೆ ಸೀಮೆ ಎಣ್ಣೆ ಬುದ್ದಿಇಡಿದು ಹೊರ ಬಂದು ಅವ್ವನ ತಟ್ಟೆ ನೋಡುತ್ತಾಳೆ !!!! ಅವ್ವನ ತಟ್ಟೆಯಲ್ಲಿ ರೊಟ್ಟಿ ಚಟ್ನಿ ಬದಲು " ಕಪ್ಪೆ"!!
ಈಗ ಸುಸ್ತಾಗುವ ಸರದಿ ಸಣ್ಣ ತಾಯಮ್ಮನದು

2 ಕಾಮೆಂಟ್‌ಗಳು:

ವಿನಯ್ ... ಹೇಳಿದರು...

ಉಮಾಶಂಕರ್ ರವರೆ,

ಅಂತೂ ಲೋಕೇಶನ ಕೃಪೆಯಿಂದ ಸಣ್ಣ ತಾಯಮ್ಮ ಕಪ್ಪೆ ತಿನ್ನುವಂಗಾಯ್ತೆನ್ನಿ...!!! ಕಪ್ಪೆಗೆ ಸರಿಯಾಗಿ ಮಸಾಲೆ ಹೊಡೆದಿದ್ದರೆ taste ಗೊತ್ತಾಗ್ತಯಿರ್ಲಿಲ್ಲವೇನೋ..!!

-- ವಿನಯ್

ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಹೇಳಿದರು...

ವಿನಯ್ ರವರೆ ಬಹಳ ತಡವಾಗಿ ಪ್ರತಿಕ್ರಿಯುಸುತ್ತಿರುವುದಕ್ಕೆ ಕ್ಷಮೆಯಿರಲಿ. ಕಾರಣಾಂತರಗಳಿಂದ ತಾಣಕ್ಕೆ ಭೇಟಿನೀಡಲಾಗದೆ ಪ್ರತಿಕ್ರಿಯಿಸಲಾಗಿರಲಿಲ್ಲ. ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಅನಂತಾನಂತ ಧನ್ಯವಾದಗಳು ಸರ್ :)